ನಮ್ಮ ನಗರಗಳಲ್ಲಿ ವ್ಯಾಪಾರ, ವ್ಯವಹಾರಗಳಲ್ಲಿ ಮಗ್ನರಾಗಿ ಅಲ್ಲಿಂದಿಲ್ಲಿಗೆ ಓಡಾಡುತ್ತಿರುವವರು ತಮ್ಮ ಮೇಲೆ ಇನ್ನೇನು ಬರಲಿರುವ ನ್ಯಾಯತೀರ್ಪಿನ ದಿನದ ಬಗ್ಗೆ ಎಂದಾದರೂ ಆಲೋಚಿಸಿದ್ದಾರೆಯೇ? ಎಂದು ಶ್ರೀಮತಿ ವೈಟಮ್ಮನವರು ತಮ್ಮಲ್ಲಿ ಪ್ರಶ್ನೆ ಹಾಕಿಕೊಂಡಿದ್ದರು. ಅತಿ ಶೀಘ್ರದಲ್ಲಿ ಬರಲಿರುವ ಆ ಮಹಾನ್ಯಾಯತೀರ್ಪಿನ ದಿನವನ್ನು ಯಾವಾಗಲೂ ಗಮನದಲ್ಲಿಟ್ಟುಕೊಂಡು ನಾವು ಪ್ರತಿಯೊಬ್ಬರೂ ಜೀವಿಸಬೇಕು (ಸೆರ್ಮನ್ಸ್ ಅಂಡ್ ಟಾಕ್ಸ್, ಸಂಪುಟ 1, ಪುಟ 25, 1886). ಕೊಕಾಘ 43.2
ನ್ಯಾಯತೀರ್ಪಿನ ಬಗ್ಗೆ ಗಮನ ಹರಿಸದೆ ನಾವು ಜೀವಿಸಲು ಸಾಧ್ಯವಿಲ್ಲ. ಆ ದಿನವು ಬಹಳ ತಡವಾಗಿದ್ದರೂ, ಈಗ ಹತ್ತಿರದಲ್ಲಿದೆ, ಬಾಗಿಲಲ್ಲಿಯೇ ಇದೆ, ತ್ವರೆಯಿಂದ ಬರಲಿದೆ. ಪ್ರಧಾನ ದೂತನ ತುತ್ತೂರಿ ಶಬ್ದವು ಶೀಘ್ರದಲ್ಲಿಯೇ ಜೀವಿಸಿರುವವರನ್ನು ಬೆಚ್ಚಿ ಬೀಳುವಂತೆ ಮಾಡುತ್ತದೆ ಹಾಗೂ ಸತ್ತಿರುವವರನ್ನು ಪುನರುತ್ಥಾನಗೊಳಿಸುತ್ತದೆ (ಚೈಲ್ಡ್ ಗೈಡನ್ಸ್, ಪುಟಗಳು 560, 561, 1892). ಕೊಕಾಘ 43.3