Go to full page →

ನಗರಗಳಿಂದ ಪಲಾಯನ ಮಾಡಲು ಸೂಚನೆಗಳು ಕೊಕಾಘ 69

ಆದಿಕ್ರೈಸ್ತ ಸಭೆಯ ಶಿಷ್ಯರಂತೆ ಜನವಸತಿಯಿಲ್ಲದ, ಏಕಾಂತವಾದ ಸ್ಥಳದಲ್ಲಿ ನಾವು ಆಶ್ರಯ ಪಡೆದುಕೊಳ್ಳಬೇಕಾದ ಸಮಯ ದೂರವೇನಿಲ್ಲ. ರೋಮನ್ನರು ಯೆರೂಸಲೇಮಿಗೆ ಮುತ್ತಿಗೆ ಹಾಕುವುದು ಯೆಹೂದ್ಯ ಕ್ರೈಸ್ತರಿಗೆ ಅಲ್ಲಿಂದ ಪಲಾಯನ ಮಾಡಲು ಸೂಚನೆಯಾಗಿತ್ತು. ಅದೇ ರೀತಿಯಾಗಿ ರೋಮನ್ ಕಥೋಲಿಕ್ ಸಭೆಯು ಭಾನುವಾರಾಚರಣೆಯ ಶಾಸನವನ್ನು ಕಡ್ಡಾಯವಾಗಿ ಜಾರಿಗೆ ತಂದಲ್ಲಿ, ನಾವು ನಗರಗಳನ್ನು ಬಿಟ್ಟು ಹಳ್ಳಿಗಾಡುಗಳಿಗೆ ಪಲಾಯನ ಮಾಡಬೇಕೆಂಬ ಎಚ್ಚರಿಕೆಯ ಸೂಚನೆಯಾಗಿದೆ (ಟೆಸ್ಟಿಮೊನೀಸ್, ಸಂಪುಟ 5, ಪುಟಗಳು 464, 465, 1885). ಕೊಕಾಘ 69.1