Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕೃಪಾಕಾಲ ಮುಗಿದ ನಂತರ ಮನುಷ್ಯರ ಚಟುವಟಿಕೆಗಳು

    ಕೃಪಾಕಾಲ ಮುಕ್ತಾಯದ ನಂತರವೂ ನೀತಿವಂತರು ಮತ್ತು ದುಷ್ಟರು ಈ ಲೋಕದಲ್ಲಿ ಇನ್ನೂ ಜೀವಿಸುತ್ತಿರುವರು, ಪರಲೋಕದಲ್ಲಿರುವ ದೇವದರ್ಶನದಲ್ಲಿ ಅಂತಿಮವಾದ ಹಾಗೂ ಎಂದೆಂದಿಗೂ ಮಾರ್ಪಡಿಸಲಾಗದ ಅಥವಾ ಹಿಂದಕ್ಕೆ ತೆಗೆದುಕೊಳ್ಳಲಾಗದ ನಿರ್ಧಾರವು ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಮನುಷ್ಯರಿಗೆ ತಿಳಿದಿರುವುದಿಲ್ಲ. ಈ ವಿಷಯದಲ್ಲಿ ದಿ ಗ್ರೇಟ್ ಕಾಂಟ್ರೊವರ್ಸಿ ಪುಸ್ತಕದ 61ನೇ ಪುಟದಲ್ಲಿ ಶ್ರೀಮತಿ ವೈಟಮ್ಮನವರು ಹೀಗೆ ತಿಳಿಸುತ್ತಾರೆ:ಕೊಕಾಘ 134.4

    ‘ದೇವರ ಪವಿತ್ರಾತ್ಮನು ಅಂತಿಮವಾಗಿ ತೆಗೆಯಲ್ಪಟ್ಟಿದ್ದರೂ ಜನರು ತಮ್ಮದೇ ಆದ ಧಾರ್ಮಿಕ ಆಚರಣೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ಹಾಗೂ ಅದನ್ನು ಮುಂದುವರೆಸುವರು, ದುಷ್ಟನಾದ ಸೈತಾನನು ತನ್ನ ಕೆಟ್ಟ ಆಲೋಚನೆಗಳನ್ನು ಸಾಧಿಸಲು ಮನುಷ್ಯರನ್ನು ಪೈಶಾಚಿಕವಾದ ಉತ್ಸಾಹದಿಂದ ಪ್ರೇರಿಸುತ್ತಾನೆ. ಆದರೆ ಹೊರರೂಪದಲ್ಲಿ ಅದು ದೇವರ ಮೇಲಿನ ಉತ್ಸಾಹದಂತೆ ತೋರಿಬರುತ್ತದೆ’.ಕೊಕಾಘ 134.5

    ಗೋಧಿ ಮತ್ತು ಹಣಜಿಯು ಸುಗ್ಗಿಕಾಲದ ತನಕ ಒಟ್ಟಾಗಿ ಬೆಳೆಯುವುದು, ಜೀವನದ ಕರ್ತವ್ಯಗಳನ್ನು ನಿರ್ವಹಿಸುವಾಗ ನೀತಿವಂತರು, ಕೊನೆಯವರೆಗೂ ಭಕ್ತಿಹೀನರೊಂದಿಗೆ ಸಂಪರ್ಕ ಹೊಂದಿರುವರು. ದೇವರ ಮಕ್ಕಳು ಸೈತಾನನ ಮಕ್ಕಳೊಂದಿಗೆ ಬೆರೆಸಲ್ಪಟ್ಟಿರುವರು. ಇವರ ನಡುವಣ ವ್ಯತ್ಯಾಸವು ಎಲ್ಲರಿಗೂ ಕಂಡುಬರುವುದು (ಟೆಸ್ಟಿಮೊನೀಸ್‌ ಸಂಪುಟ 5, ಪುಟ 100, 1882). ಕ್ರಿಸ್ತನು ಎರಡನೇ ಸಾರಿ ಬರುವಾಗ, ಆತನಿಗಾಗಿ ಕಾದುಕೊಂಡಿರುವವರು ವ್ಯಾಪಾರ ವ್ಯವಹಾರದಲ್ಲಿ ತೊಡಗಿರುವರು. ಕೆಲವರು ಬೀಜಬಿತ್ತುತ್ತಿರುವವರು, ಬೇರೆ ಕೆಲವರು ಒಕ್ಕಲುತನದಲ್ಲಿ ನಿರತರಾಗಿರುವರು. ಹಾಗೂ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಮಗ್ನರಾಗಿರುವರು (ಮ್ಯಾನುಸ್ಕ್ರಿಪ್ಟ್ 26, 1901).ಕೊಕಾಘ 134.6