Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ತರಾತುರಿಯಿಂದ ಹಳ್ಳಿಗಳಿಗೆ ವಾಸಸ್ಥಳ ಬದಲಿಸುವುದು ವಿವೇಕತನವಲ್ಲ

    ನಗರಗಳಿಂದ ಹಳ್ಳಿಗಳಿಗೆ ವಾಸಸ್ಥಳ ಬದಲಾಯಿಸುವ ವಿಷಯದಲ್ಲಿ ತರಾತುರಿ ಮಾಡದೆ ಎಚ್ಚರಿಕೆಯಿಂದ ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕು, ಕೆಲವರು ತರಾತುರಿಯಿಂದ ತಮಗೆ ತಿಳಿಯದ ವ್ಯಾಪಾರ, ವ್ಯವಹಾರದಲ್ಲಿ ತೊಡಗಿಸಿಕೊಳ್ಳುವರು. ಅದು ದೇವರ ದೃಷ್ಟಿಯಲ್ಲಿ ಸರಿಯಲ್ಲ, ಅವ್ಯವಸ್ಥಿತ ರೀತಿಯಲ್ಲಿ ಯಾವುದನ್ನೂ ಮಾಡಬಾರದು, ಉತ್ಸಾಹ ಬಡಿದೆಬ್ಬಿಸುವ ಹಿಂದುಮುಂದೆ ನೋಡದೆ ಭಾವೋದ್ವೇಗದ ಭಾಷಣಗಳಿಂದ ಪ್ರೇರಿತರಾದ ಅನೇಕರು ಆಸ್ತಿಯ ವಿಷಯದಲ್ಲಿ ಬಹಳ ನಷ್ಟ ಅನುಭವಿಸುವರು. ಇದು ದೇವರಿಗೆ ಮೆಚ್ಚಿಕೆಯಾದದ್ದಲ್ಲ. ದುಡುಕುತನದಿಂದ ಮತ್ತು ಸರಿಯಾದ ಉದ್ದೇಶ ಹೊಂದಿರದೆ ಮಾಡುವ ಕೆಲಸಗಳಿಂದ ಅನೇಕ ಸಾರಿ ಯಶಸ್ಸಿಗೆ ಬದಲಾಗಿ ಸೋಲುಂಟಾಗುವ ಸಂಭವವಿದೆ (ಸೆಲೆಕ್ಟ್ರಡ್ ಮೆಸೇಜಸ್, ಸಂಪುಟ 2, ಪುಟಗಳು 362, 363, 1893).ಕೊಕಾಘ 68.6